WhatsApp Group Join Now
Telegram Group Join Now
Instagram Group Join Now

ದರ್ಶನ್‌ ಗೆ ಒಳ್ಳೆಯದಾಗಬೇಕು ಮತ್ತು ಡೆವಿಲ್ ಗೆಲ್ಲಬೇಕು – ಸುಮಲತಾ ಅಂಬರೀಷ್

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವ‍ರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎಂಬುದು ಎಲ್ಲಾರಿಗೂ ತಿಳಿದಿದೆ. ಆದರೆ ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು.

ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ .. ಇದೇ ಸಮಯದಲ್ಲಿ ತಮ್ಮ ದತ್ತು ಪುತ್ರನ ಪ್ರೀತಿಯಿಂದ ಕೂಡ ಸುಮಲತಾ ಅಂಬರೀಶ್ ವಂಚಿತರಾಗಿದ್ದಾರೆ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಮದರ್ ಇಂಡಿಯಾ ಮತ್ತು ದರ್ಶನ್ ಸಂಬಂಧ ಹಳಸಿದೆ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಬಾರಿ ಜೈಲಿಂದ ಹೊರ ಬಂದಿದ್ದ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಇನ್ನೂ .. ಈ ಬಾರಿ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಆದರೆ ಇಲ್ಲಿಯವರೆಗೆ ಸುಮಲತಾ ಈ ಕುರಿತು ಮಾತನಾಡಿಲ್ಲ. ಹಿಂದೆ ದರ್ಶನ್ ಹೊರ ಬಂದಾಗ ಕೂಡ ಮನೆ ಮಗನನ್ನು ನೋಡಿಕೊಂಡು ಮಾತನಾಡಿಕೊಂಡು ಬಂದಿಲ್ಲ. ಇವೆಲ್ಲವೂ ಸಾರ್ವತ್ರಿಕ ವಲಯದಲ್ಲಿ ಚರ್ಚೆಗೀಡಾಗಿವೆ.

ಹೀಗಿರುವಾಗ ಇದೀಗ ಸುಮಲತಾ ಅಂಬರೀಶ್ ”ಡೆವಿಲ್” ಚಿತ್ರದ ಕುರಿತು ಮಾತನಾಡಿದ್ದಾರೆ. ದರ್ಶನ್‌ಗೆ ಒಳ್ಳೆಯದಾಗಬೇಕು ಎಂದು ಹೇಳಿದ್ದಾರೆ. ಹೌದು, ದರ್ಶನ್ ಅನುಪಸ್ಥಿತಿಯಲ್ಲಿ ”ಡೆವಿಲ್” ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಡಿಸೆಂಬರ್ ಹನ್ನೊಂದರಂದು ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರದ ಕೆಲಸಕ್ಕೆ ಕೂಡ ಚಾಲನೆ ನೀಡಲಾಗಿದೆ.

ಆದರೂ ದರ್ಶನ್ ಹೊರಗಡೆ ಇದ್ದಿದ್ದರೆ ”ಡೆವಿಲ್” ಚಿತ್ರದ ಪ್ರಚಾರದ ರಣತಂತ್ರ ಬೇರೆಯದ್ದೇ ರೀತಿಯಲ್ಲಿ ಇರುತ್ತಿತ್ತು. ಅದರಲ್ಲಿ ಯಾವ ಅನುಮಾನ ಇಲ್ಲ. ಈ ಹಿನ್ನೆಲೆ ಇಂದು (ನವೆಂಬರ್ 24) ಅಂಬರೀಷ್ ಅವರ ಪುಣ್ಯಸ್ಮರಣೆಯ ಹಿನ್ನೆಲೆ ಮಾಧ್ಯಮದವರಿಗೆ ಮುಖಾಮುಖಿಯಾದ ಸುಮಲತಾ ಅವರಿಗೆ ”ಡೆವಿಲ್” ಚಿತ್ರದ ಪ್ರಚಾರದ ಕುರಿತು ಪ್ರಶ್ನೆ ಮಾಡಲಾಗಿದೆ. ದರ್ಶನ್ ಅನುಪಸ್ಥಿತಿಯಿಂದ ಹಿನ್ನೆಡೆಯಾಗುತ್ತಾ ? ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಸುಮಲತಾ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸುಮಲತಾ ಅಂಬರೀಶ್ ”ಡೆವಿಲ್” ಚಿತ್ರತಂಡದವರ ಪ್ರಚಾರ ವೈಖರಿ ಸರಿಯಾಗಿದೆ ಎಂದು ಹೇಳಿದ್ದಾರೆ. ಸಿನಿಮಾದ ಪ್ರಚಾರಕ್ಕೆ ನಾನು ಯಾವತ್ತು ನೇರವಾಗಿ ಭಾಗವಹಿಸಿಲ್ಲ ಎಂದು ಹೇಳಿರುವ ಸುಮಲತಾ ನಾನು ದರ್ಶನ್ ಅವರ ಹಿತೈಶಿ, ”ಡೆವಿಲ್” ಚಿತ್ರ ಗೆಲ್ಲಬೇಕು, ಯಶಸ್ವಿಯಾಗಬೇಕು ಎಂಬುವುದೇ ನನ್ನ ಹಾರೈಕೆ ಎಂದು ಹೇಳಿದ್ದಾರೆ.

ಮುಂದುವರೆದು ನಡೆದು ಹೋದ ವಿಚಾರದ ಕುರಿತು ಮಾತನಾಡಿ ಈಗ ಪ್ರಯೋಜನ ಇಲ್ಲ ಎಂದು ಹೇಳಿರುವ ಸುಮಲತಾ ಅಂಬರೀಶ್ ಸತ್ಯವನ್ನು ಯಾರು ಕೂಡ ಶಾಶ್ವತವಾಗಿ ಮುಚ್ಚಿಡಲು ಸಾಧ್ಯ ಇಲ್ಲ. ದೇವರಿದ್ದಾನೆ, ಖಂಡಿತ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ. ತುಂಬಾನೇ ಸವಾಲಿನ ಪರಿಸ್ಥಿತಿ ಇದು ಅವರ ಅಭಿಮಾನಿಗಳು ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ. ನಾವು ಕೂಡ ಕಾಯುತ್ತಿದ್ದೇವೆ ಎಂದು ಹೇಳಿರುವ ಸುಮಲತಾ ಅಂಬರೀಶ್ ದರ್ಶನ್ ಅವರಿಗೆ ಒಳ್ಳೆಯದೇ ಆಗಬೇಕು ಎನ್ನುವುದು ನಮ್ಮೆಲ್ಲರ ಹಾರೈಕೆ ಎಂದು ಹೇಳಿದ್ದಾರೆ.

ಇನ್ನುಳಿದಂತೆ ”ಡೆವಿಲ್” ಚಿತ್ರದ ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂರು ಹಾಡುಗಳು ಕೂಡ ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗಿವೆ. ಪ್ರಕಾಶ್ ವೀರ್ ನಿರ್ದೇಶನದ ಚಿತ್ರದಲ್ಲಿ ರಚನಾ ರೈ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಪ್ರಚಾರದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading