ಕೈಚಾಚಿದ್ದು, ಕಣ್ಣೀರು ಹಾಕಿದ್ದು ಸಾಕು: ವಿಷ್ಣು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಕರೆ
ಬೆಂಗಳೂರು:ಅಭಿಮಾನ ಸ್ಟುಡಿಯೋನಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವ ಘಟನೆ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ವಿಷ್ಣು ಅಭಿಮಾನಿಗಳಂತೆ, ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ತಮ್ಮ ಆಕ್ರೋಶ ಮತ್ತು ಬೇಸರವನ್ನು ತೋರಿಸಿದ್ದಾರೆ. ಸಮಾಧಿ ಧ್ವಂಸವಾದ ನಂತರ ತಮ್ಮ ವಿಡಿಯೋ ಸಂದೇಶದ ಮೂಲಕ ಸುದೀಪ್ ಅಭಿಮಾನಿಗಳಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ. “ವಿಷ್ಣು ಸರ್ ಸಮಾಧಿಯೊಟ್ಟಿಗೆ ಏನು ನಡೆಯಿತೋ, ಅದು ನಡೆಯಬಾರದಿತ್ತು. ನಾವು ಎಷ್ಟೋ ಬಾರಿ ಮನವಿ ಮಾಡಿದ್ದೇವೆ, ಅಧಿಕಾರದಲ್ಲಿದ್ದವರು ಸ್ವಲ್ಪ…
